ನಾನಲ್ಲಿ ಹೋದಾಗ ಅವಳು ಇಲ್ಲದ ಕಾಲಿನ ಮುಂದೆ ಚಾಕ್ ಪೀಸ್ ನಿಂದ ಕಾಲಿನ ಚಿತ್ರ ಬರೆದು ಕುಳಿತುಕೊಂಡಿದ್ದಳು ಎನ್ನುತ್ತಾ ಕಾಫಿ ಹೀರಿದ ಸ್ಥವಿರ.
ಎಷ್ಟೊತ್ತಿಗೆ ಏನು ತಗೋತೀಯಾ ಅಂದಾಗೆಲ್ಲಾ ಮಗಾ ಹಾಟ್ ಇರಲಿ ಅಂತಾ ಆಲ್ಕೋಹಾಲ್ ಕ್ಯಾಬಿನ್ ಕಡೆಗೆ ಕೈ ತೋರಿಸುತ್ತಿದ್ದವನು ಇವನೇನಾ ಅನ್ನುತ್ತಾ ಹುಬ್ಬೇರಿಸಿದ ವರುಣ್ ಅವನ ಕೈ ಲಿದ್ದ ಕಾಫಿ ಕಪ್ ನೋಡುತ್ತಾ.
ವಿಚಿತ್ರ ಹುಡುಗಿ , ನಾನವಳನ್ನು ಮೊದಲ ಬಾರಿ ನೋಡಿದ್ದು ಒಂದು accident ನಲ್ಲಿ . ಆ ಕಣ್ಣುಗಳನ್ನು ಮರೆಯೋಕೆ ಆಗದೆ ಅವಳಲ್ಲಿಗೆ ಹೋಗಿದ್ದೆ. ಆ ಕಣ್ಣಗಳು ಅದೆಷ್ಟು ಹುಚ್ಚು ಹಿಡಿಸಿದ್ದವು ಎಂದರೆ, ಮದುವೆ ಆಗ್ತೀರಾ ಅಂದಿದ್ದೆ. ಶ್ರೀಮಂತರರಿಗೆಲ್ಲ ಕೈ ಕಾಲಿಲ್ಲದವರನ್ನು ಮದುವೆಯಾಗುವುದು ಚಾರಿಟಿ ಪ್ರೆಸ್ಟೀಜ್ ಅಡಿಯಲ್ಲಿ ಬರುತ್ತಾ ? ಅವನ್ಯಾವನೋ ಕುಡಿದು ಕಾರು ಹತ್ತಿಸಿ ಪ್ರಾಣ ತೆಗೆದು, ಹೋದ ಜೀವಕ್ಕೆ ದುಡ್ಡಲ್ಲಿ ಬೆಲೆ ಕಟ್ಟಿ ಆರಾಮಾಗಿ ಓಡಾಡುತ್ತಾನೆ. ನೀನಿಗ ಮದುವೆಯಾಗಿ ದೊಡ್ಡವನಾಗಹೊರಟಿದ್ದೀಯಾ, ಅಂದಳು. ಅವಳ ಮಾತು ಮತ್ತು ದೃಷ್ಟಿಯ ತೀಕ್ಷ್ಣತೆಗೆ ಅಲ್ಲಿರಲಾರದೆ ಹೊರಬಂದೆ.
ಕಣ್ಣಸನ್ನೆಯಲ್ಲಿ ನೂರು ಹುಡುಗಿಯರನ್ನು ಬೀಳಿಸಿಕೊಳ್ಳಬಲ್ಲ ತಾಕತ್ತಿರುವ, ಅವನಾಡಿಸುವ ದುಡ್ಡಿನ ಕಂತೆಗೆ ಹಿಂದೆ ಬರುವ ಹುಡುಗಿಯರಿರುವ ದ ರಿಚ್ , ರಾಯಲ್ ,ಗ್ರೇಟ್ ಸ್ಥವಿರ ಎನ್ನುವ ಹುಡುಗ ಒಬ್ಬ ಕುಂಟಿಯನ್ನು ಮದುವೆಯಾಗಲು ಹೊರಟಿದ್ದನಾ ಎನ್ನುವ ಆಶ್ಚರ್ಯ ವರುಣ್ ಮುಖದ ಮೇಲಿತ್ತು.
ಸ್ಥವಿರ ಮುಂದುವರೆಸಿದ, ಹೊರಬಂದವನಿಗೆ ಅವಳಮ್ಮ "ಇದೇನೋ ಪ್ರಾಜೆಕ್ಟ್ ಅಂತಾ ಓಡಾಡುತ್ತಿದ್ದಳು . ಗೆಳೆಯರ ಜೊತೆ ಸೇರಿ ವೆಡ್ಡಿಂಗ್ ಪ್ಲಾನಿಂಗ್ , ಇವೆಂಟ್ ಮ್ಯಾನೇಜ್ಮೆಂಟ್ ನ ಬ್ಯುಸಿನೆಸ್ ಮಾಡಬೇಕೆಂದು ಅಂದುಕೊಂಡಿದ್ದಳು. ಅಷ್ಟರಲ್ಲಿ ಹೀಗೆ" .. . ಎನ್ನುತ್ತಾ ಅವರಿಂದ ಮುಂದೆ ಮಾತನಾಡಲಾಗಲಿಲ್ಲ.
ಮನೆಗೆ ಬಂದವನೇ ಅವಳ ಪ್ರಾಜೆಕ್ಟ್ ಡೀಟೇಲ್ಸ್ ಸ್ಟಡಿ ಮಾಡಿ ಅವಳ ಗೆಳೆಯರನ್ನೆಲ್ಲ ಸೇರಿಸಿದೆ . ಅವಳದ್ದೇ ಆದ ಕಂಪನಿಯನ್ನು ಸ್ಟಾರ್ಟ್ ಮಾಡಿಸಿದೆ. ಅವಳನ್ನು ಇಲ್ಲಿಗೆ ಬರುವಂತೆ ಮಾಡಿದೆ. ನಿಧಾನ ಕಂಪನಿ ಹೆಸರು , ಹಣ ಗಳಿಸಿತು. ಅವಳೆಂಥವಳೆಂದರೆ ನನ್ನ ಹಣ ಸಹಾಯವನ್ನು ಒಂದು ಪೈಸೆ ಬಿಡದೆ ವಾಪಸ್ ಮಾಡಿದಳು.
ಏನೋ ಹೇಳಬೇಕೆಂದು ಬಾಯಿತೆರೆದ ವರುಣ್ ಗೆ ,
ಮೊದಲು ಎಲ್ಲವನ್ನು ಕೇಳು ಎನ್ನುವಂತೆ ಸನ್ನೆ ಮಾಡಿ ಸ್ಥವಿರ ಮತ್ತೆ ಮುಂದುವರೆಸಿದ..
ಮತ್ತೆ ಮಂಡಿಯೂರಿದ್ದೆ ಅವಳ ಮುಂದೆ ಬೊಗಸೆಯೊಡ್ಡಿ ಪ್ರೀತಿಗಾಗಿ. ಆದರೆ ಅವಳು , ನಿಮ್ಮನ್ನ , ನಿಮ್ಮ ಪ್ರೀತಿಯನ್ನ ಒಪ್ಪಿಕೊಳ್ಳಬೇಕು ಎಂದುಕೊಂಡಾಗೆಲ್ಲ ಇದೇ ಅಡ್ಡಿ ಬರುತ್ತೆ ನೋಡಿ ಅಂದಳು ವಾಕಿಂಗ್ ಸ್ಟಿಕ್ ನೋಡುತ್ತಾ... ಮಾತನಾಡುತ್ತಿದ್ದ ಸ್ಥವಿರನ ಗಂಟಲು ಕಟ್ಟಿದ್ದು ವರುಣ್ ಗಮನಕ್ಕೆ ಬಂತು..
"ನೀ ಹೇಗೆ ಇಷ್ಟೆಲ್ಲ ಬದಲಾದೆ ? ಅದೂ ಯಕಶ್ಚಿತ್ ಯಾವುದೋ ಆ್ಯಕ್ಸಿಡೆಂಟ್ ನಲ್ಲಿ ಭೇಟಿಯಾದ ಹುಡುಗಿಗಾಗಿ, ಕುಂಟಿಗಾಗಿ, ಇದು ಸಿಲ್ಲಿ ಅನ್ನಿಸ್ತಿಲ್ವಾ ನಿಂಗೆ "ಎಂದ ವರುಣ್ ಮಾತಿಗೆ ಸ್ಥವಿರ "ಇಲ್ಲ"ಎಂದು ಕಿರುಚಿದ್ದು ಆ ಮನೆಯ ಹಾಲ್ ನಲ್ಲಿ ಪ್ರತಿಧ್ವನಿಸಿತ್ತು.
" ಅವತ್ತು ಕುಡಿದ ಮತ್ತಿನಲ್ಲಿ ಆ ಆ್ಯಕ್ಸಿಡೆಂಟ್ ಮಾಡಿದ್ದು ನಾನೇ, ಕಾಲು ಕಳೆದುಕೊಂಡಿದ್ದು ಅವಳು"
ಈ ಮಾತನ್ನು ಕೇಳಿ ಉಗುಳು ನುಂಗಿಕೊಂಡ ವರುಣ್, ಹಾವು ಮೆಟ್ಟಿ ಬೆಚ್ಚಿಬಿದ್ದಂತಾಗಿದ್ದ.
"ಶ್ರೀಮಂತಿಕೆ, ಬುದ್ಧಿವಂತಿಕೆ, ಸೌಂದರ್ಯ ಎಲ್ಲ ಸೇರಿದಾಗ ಸ್ವಲ್ಪ ಹೆಚ್ಚಿನದೇ ಉಡಾಫೆ ಪೊಗರಿರುವುದು ತಪ್ಪಲ್ಲ ಎನಿಸಿತ್ತು , ಆದರೆ ಅದೆಲ್ಲ ಈಮಟ್ಟಕ್ಕೆ ಒಬ್ಬರ ಜೀವ ತೆಗೆಯುವ ಮಟ್ಟಕ್ಕೆ ನಿನ್ನ ತಳ್ಳಬಹುದು ಅಂತಾ ಗೊತ್ತಿರಲಿಲ್ಲ" ಕಣೋ ..
"ನನಗೂ ಗೊತ್ತಿರಲಿಲ್ಲ " ಎಂದು ವರುಣ್ ನ ತಬ್ಬಿಕೊಂಡ ಸ್ಥವಿರನ ಕಣ್ಣಲ್ಲಿ ನೀರಿತ್ತು. "ಸರಿ ಮಾಡಿಕೊಳ್ಳುವುದಕ್ಕೆ ಒಂದೇ ಒಂದು ಅವಕಾಶಕ್ಕೆ ಕಾಯುತ್ತಿದ್ದೀನಿ , ಅವಳನ್ನ ನೋಡುವಾಗೆಲ್ಲಾ ಚೂರಿ ಇರಿದಂತಾಗುತ್ತೆ. ಒಪ್ಪದ ಅವಳು ಮಾತ್ರ ತಣ್ಣನೆ ಕಣ್ಣುಗಳ ಕೊಲೆಗಾರ್ತಿ"....
***********
ಟೆರೆಸ್ ಗಾರ್ಡೆನ್ ನಲ್ಲಿ ಕಾಫಿ ಕುಡಿಯುತ್ತಾ ಕುಳಿತಿದ್ದಳು ಹರಿಣಿ.
"ನಾನು ವರುಣ್ , ಸ್ಥವಿರನ ಬೆಸ್ಟ್ ಪ್ರೆಂಡ್ " ಪರಿಚಯ ಮಾಡಿಕೊಂಡ ವರುಣ್ .
ನಾನು ಹರಿಣಿ .. ಸ್ಥವಿರ ಹೇಳಿರಬೇಕಲ್ಲ ಎಂದು ನಕ್ಕಳು..
ಥ್ಯಾಂಕ್ಸ್ ನಿಮಗೆ , ಅವನಲ್ಲಿನ ಬದಲಾವಣೆಗೆ... ಇವತ್ತು ನೋಡಿ ನನ್ನ ಇಲ್ಲಿ ಬಿಟ್ಟು ಮೀಟಿಂಗ್ ಅಂತಾ ಹೋಗಿಬಿಟ್ಟ, ಒಂದಷ್ಟು ಜವಾಬ್ದಾರಿ , ಸಹನೆ , ಇನ್ನೊಬ್ಬರಿಗೆ ಸಹಾಯ ಮಾಡುವ ಒಳ್ಳೆತನ ಎಲ್ಲಾ ಬಂದಿದೆ.
ನಕ್ಕಳು ಅವಳು..
ಅವನ ಒಳ್ಳೆತನವನ್ನೂ ನೀವು ಒಪ್ಪಿಕೊಂಡಿದ್ದರೆ.... ಮಾತು ಮುಂದುವರೆಸ ಬೇಕಾ ಬೇಡವಾ ಎಂಬಂತೆ
ಹರಿಣಿಯ ಮುಖ ನೋಡಿವನಿಗೆ ಅವಳ ಮುಖದಿಂದ ನಗು ಮಾಯವಾಗಿದ್ದು ಸ್ಪಷ್ಟವಾಗಿತ್ತು.
ಸಹಾಯಕ್ಕೆ ಬದಲಾಗಿ ಪ್ರೀತಿಯನ್ನು ಒಪ್ಪಿಕೋ ಅಂತಾ ಹೇಳ್ತಿದೀರಾ ಅಲ್ಲವಾ..
ಹಾಗಲ್ಲ ಅವನು ನಿಮಗೋಸ್ಕರ, ನಿಮ್ಮಿಂದ ಬದಲಾಗಿದ್ದಾನೆ ....
ಅವರ "ಈ ಬದಲಾವಣೆಗಾಗಿ ನಾನು ತೆತ್ತ ಬೆಲೆ ನನ್ನ ಕಾಲು ವರುಣ್", ಸಹಾಯಕ್ಕೆ ಕೃತಜ್ಞತೆಯಿದೆ, ಆದರೆ ಕೆಲ ಗಾಯಗಳೂ ಯಾವತ್ತೂ ವಾಸಿಯಾಗಲ್ಲ ಮನಸಿನ ಮೇಲಾದವುಗಳು. "ಅವತ್ತಿನ ಆ ರಾತ್ರಿಯಲ್ಲಿ , ಜಜ್ಜಿ ಅಪ್ಪಚ್ಚಿಯಾದ ಕಾಲು, ದೂರ ಕಾರು ನಿಲ್ಲಿಸಿ , ಇಳಿದು ಒಮ್ಮೆ ನೋಡಿದ ಅವನ ಮುಖ, ಅವನೆಸೆದು ಹೋದ ದುಡ್ಡಿನ ಕಂತೆ ... ಇದೆಲ್ಲ ಇವತ್ತಿಗೂ ನನಗೆ ನಿತ್ಯವೂ ಬೀಳುವ ಕನಸಿನ ಭಾಗಗಳು"...
"ಎಲ್ಲ ತಪ್ಪುಗಳಿಗೂ ಶಿಕ್ಷೆಯಾಗಬಾರದು ಎಂದಾದರೆ , ಎಲ್ಲ ತಪ್ಪುಗಳಿಗೂ ಕ್ಷಮೆಯೂ ಇರುವುದಿಲ್ಲ" ಅಲ್ಲವಾ .
ಜೀವನ ಪರ್ಯಂತ ಶಿಕ್ಷಿಸಹೋರಟಿದ್ದೀರಾ? ಅವನೆದುರೇ ಇದ್ದು ಕಾಡುವ ಬದಲು ದೂರ ಮರೆಯಾಗಿಬಿಡಬಹುದಲ್ಲ.
ಮದುವೆಯಾದರೆ ಎಲ್ಲಾ ಪೂರ್ಣವಾಗಲ್ಲ , ಮತ್ತಷ್ಟು ಛೇದವೇ, ನಾನು ದಕ್ಕಿದ ಖುಷಿಗೆ ಮತ್ತೆ ಕುಡಿತ, ಮತ್ತೆ ಡ್ರೈವಿಂಗ್ , ನಾನೇ ಅವನ ಗುರಿಯಾಗಿರುವಾಗ ನನ್ನ ತಲುಪಿದ ಖುಷಿಗೆ ಮತ್ತೆ ಉಢಾಫೆ ಎಲ್ಲವೂ ಮರುಕಳಿಸುತ್ತವೆ. ನಾನವನನ್ನು ಅರ್ಥಮಾಡಿಕೊಂಡಿದ್ದೇನೆ.. ಈಗ ನೀವೆಂದ ಬದಲಾವಣೆಗಳೆಲ್ಲ ಮತ್ತೆ ಮೊದಲ ಬಿಂದುವಿಗೆ ಮುಟ್ಟುತ್ತೆ ವರುಣ್ . ನನ್ನಿರುವು, ನನ್ನೆಡೆಗಿನ ಪ್ರೀತಿ ಅವನನ್ನು ಸದಾ ಜಾಗೃತವಾಗಿಡುತ್ತದೆಯೆಂದಾದರೆ ಹಾಗೆ ಇರಲಿ...
ಇದು ಶಿಕ್ಷೆಯಲ್ಲ .. ನಿಮ್ಮ ಗೆಳೆಯನ ರಕ್ಷಣೆಗೆ ನಿಂತಿದ್ದೇನೆಂದುಕೊಳ್ಳಿ..
ಮೊದಲು ಪೋಣಿಸಿದ್ದು ಕೆಲವು ಸುಳ್ಳುಗಳು, ಅವನೆಡೆಗಿನ ಪ್ರೀತಿಯೇ ಇದನ್ನೆಲ್ಲ ಮಾಡಿಸುತ್ತಿರುವುದು. ಎಂದು ಮನಸಿನಲ್ಲೆ ಅಂದುಕೊಳ್ಳುತ್ತಿದ್ದರೂ ಕೊನೆಯ ವಾಕ್ಯ ಹರಿಣಿಯ ಬಾಯಿಂದ ಅಪ್ರಯತ್ನವಾಗಿ ಹೊರಬಂದು ಬಿಟ್ಟಿತ್ತು.
ಅವನಿಗೆ ಕೇಳಿಸಿತಾ ಎಂದು ತಟ್ಟನೆ ತಿರುಗಿದಳು ..
ಕೊನೆಯ ಮಾತು ತನಗೇ ಕೇಳಿಸಲೇ ಇಲ್ಲವಂಬಂತೆ ಅವಳಿಗೆ ಬೆನ್ನು ಹಾಕಿ ಹೊರಟಿದ್ದ ವರುಣ್. ಅವನಿಗೆ ಅವಳ ಪ್ರೀತಿ ಅರ್ಥವಾಗಿತ್ತು, ಮತ್ತೂ ತಾನು ಅದನ್ನೆಂದೂ ಸ್ಥವಿರನಿಗೆ ಹೇಳಲಾರೆ ಎಂದು ನಿರ್ಧರಿಸುತ್ತಲೇ ಮೆಟ್ಟಿಲಿಳಿಯತೊಡಗಿದ..
ಇತ್ತ ಮನದಲ್ಲಿ ಮೂಡುತ್ತಿದ್ದ ಸ್ಥವಿರನ ಚಿತ್ರವನ್ನು ಅಳಿಸುವಂತೆ ತಲೆಕೊಡವುತ್ತಾ ವಾಕಿಂಗ್ ಸ್ಟಿಕ್ ಹಿಡಿದು ಎದ್ದು ನಿಂತಳು ಹರಿಣಿ.
ಎಷ್ಟೊತ್ತಿಗೆ ಏನು ತಗೋತೀಯಾ ಅಂದಾಗೆಲ್ಲಾ ಮಗಾ ಹಾಟ್ ಇರಲಿ ಅಂತಾ ಆಲ್ಕೋಹಾಲ್ ಕ್ಯಾಬಿನ್ ಕಡೆಗೆ ಕೈ ತೋರಿಸುತ್ತಿದ್ದವನು ಇವನೇನಾ ಅನ್ನುತ್ತಾ ಹುಬ್ಬೇರಿಸಿದ ವರುಣ್ ಅವನ ಕೈ ಲಿದ್ದ ಕಾಫಿ ಕಪ್ ನೋಡುತ್ತಾ.
ವಿಚಿತ್ರ ಹುಡುಗಿ , ನಾನವಳನ್ನು ಮೊದಲ ಬಾರಿ ನೋಡಿದ್ದು ಒಂದು accident ನಲ್ಲಿ . ಆ ಕಣ್ಣುಗಳನ್ನು ಮರೆಯೋಕೆ ಆಗದೆ ಅವಳಲ್ಲಿಗೆ ಹೋಗಿದ್ದೆ. ಆ ಕಣ್ಣಗಳು ಅದೆಷ್ಟು ಹುಚ್ಚು ಹಿಡಿಸಿದ್ದವು ಎಂದರೆ, ಮದುವೆ ಆಗ್ತೀರಾ ಅಂದಿದ್ದೆ. ಶ್ರೀಮಂತರರಿಗೆಲ್ಲ ಕೈ ಕಾಲಿಲ್ಲದವರನ್ನು ಮದುವೆಯಾಗುವುದು ಚಾರಿಟಿ ಪ್ರೆಸ್ಟೀಜ್ ಅಡಿಯಲ್ಲಿ ಬರುತ್ತಾ ? ಅವನ್ಯಾವನೋ ಕುಡಿದು ಕಾರು ಹತ್ತಿಸಿ ಪ್ರಾಣ ತೆಗೆದು, ಹೋದ ಜೀವಕ್ಕೆ ದುಡ್ಡಲ್ಲಿ ಬೆಲೆ ಕಟ್ಟಿ ಆರಾಮಾಗಿ ಓಡಾಡುತ್ತಾನೆ. ನೀನಿಗ ಮದುವೆಯಾಗಿ ದೊಡ್ಡವನಾಗಹೊರಟಿದ್ದೀಯಾ, ಅಂದಳು. ಅವಳ ಮಾತು ಮತ್ತು ದೃಷ್ಟಿಯ ತೀಕ್ಷ್ಣತೆಗೆ ಅಲ್ಲಿರಲಾರದೆ ಹೊರಬಂದೆ.
ಕಣ್ಣಸನ್ನೆಯಲ್ಲಿ ನೂರು ಹುಡುಗಿಯರನ್ನು ಬೀಳಿಸಿಕೊಳ್ಳಬಲ್ಲ ತಾಕತ್ತಿರುವ, ಅವನಾಡಿಸುವ ದುಡ್ಡಿನ ಕಂತೆಗೆ ಹಿಂದೆ ಬರುವ ಹುಡುಗಿಯರಿರುವ ದ ರಿಚ್ , ರಾಯಲ್ ,ಗ್ರೇಟ್ ಸ್ಥವಿರ ಎನ್ನುವ ಹುಡುಗ ಒಬ್ಬ ಕುಂಟಿಯನ್ನು ಮದುವೆಯಾಗಲು ಹೊರಟಿದ್ದನಾ ಎನ್ನುವ ಆಶ್ಚರ್ಯ ವರುಣ್ ಮುಖದ ಮೇಲಿತ್ತು.
ಸ್ಥವಿರ ಮುಂದುವರೆಸಿದ, ಹೊರಬಂದವನಿಗೆ ಅವಳಮ್ಮ "ಇದೇನೋ ಪ್ರಾಜೆಕ್ಟ್ ಅಂತಾ ಓಡಾಡುತ್ತಿದ್ದಳು . ಗೆಳೆಯರ ಜೊತೆ ಸೇರಿ ವೆಡ್ಡಿಂಗ್ ಪ್ಲಾನಿಂಗ್ , ಇವೆಂಟ್ ಮ್ಯಾನೇಜ್ಮೆಂಟ್ ನ ಬ್ಯುಸಿನೆಸ್ ಮಾಡಬೇಕೆಂದು ಅಂದುಕೊಂಡಿದ್ದಳು. ಅಷ್ಟರಲ್ಲಿ ಹೀಗೆ" .. . ಎನ್ನುತ್ತಾ ಅವರಿಂದ ಮುಂದೆ ಮಾತನಾಡಲಾಗಲಿಲ್ಲ.
ಮನೆಗೆ ಬಂದವನೇ ಅವಳ ಪ್ರಾಜೆಕ್ಟ್ ಡೀಟೇಲ್ಸ್ ಸ್ಟಡಿ ಮಾಡಿ ಅವಳ ಗೆಳೆಯರನ್ನೆಲ್ಲ ಸೇರಿಸಿದೆ . ಅವಳದ್ದೇ ಆದ ಕಂಪನಿಯನ್ನು ಸ್ಟಾರ್ಟ್ ಮಾಡಿಸಿದೆ. ಅವಳನ್ನು ಇಲ್ಲಿಗೆ ಬರುವಂತೆ ಮಾಡಿದೆ. ನಿಧಾನ ಕಂಪನಿ ಹೆಸರು , ಹಣ ಗಳಿಸಿತು. ಅವಳೆಂಥವಳೆಂದರೆ ನನ್ನ ಹಣ ಸಹಾಯವನ್ನು ಒಂದು ಪೈಸೆ ಬಿಡದೆ ವಾಪಸ್ ಮಾಡಿದಳು.
ಏನೋ ಹೇಳಬೇಕೆಂದು ಬಾಯಿತೆರೆದ ವರುಣ್ ಗೆ ,
ಮೊದಲು ಎಲ್ಲವನ್ನು ಕೇಳು ಎನ್ನುವಂತೆ ಸನ್ನೆ ಮಾಡಿ ಸ್ಥವಿರ ಮತ್ತೆ ಮುಂದುವರೆಸಿದ..
ಮತ್ತೆ ಮಂಡಿಯೂರಿದ್ದೆ ಅವಳ ಮುಂದೆ ಬೊಗಸೆಯೊಡ್ಡಿ ಪ್ರೀತಿಗಾಗಿ. ಆದರೆ ಅವಳು , ನಿಮ್ಮನ್ನ , ನಿಮ್ಮ ಪ್ರೀತಿಯನ್ನ ಒಪ್ಪಿಕೊಳ್ಳಬೇಕು ಎಂದುಕೊಂಡಾಗೆಲ್ಲ ಇದೇ ಅಡ್ಡಿ ಬರುತ್ತೆ ನೋಡಿ ಅಂದಳು ವಾಕಿಂಗ್ ಸ್ಟಿಕ್ ನೋಡುತ್ತಾ... ಮಾತನಾಡುತ್ತಿದ್ದ ಸ್ಥವಿರನ ಗಂಟಲು ಕಟ್ಟಿದ್ದು ವರುಣ್ ಗಮನಕ್ಕೆ ಬಂತು..
"ನೀ ಹೇಗೆ ಇಷ್ಟೆಲ್ಲ ಬದಲಾದೆ ? ಅದೂ ಯಕಶ್ಚಿತ್ ಯಾವುದೋ ಆ್ಯಕ್ಸಿಡೆಂಟ್ ನಲ್ಲಿ ಭೇಟಿಯಾದ ಹುಡುಗಿಗಾಗಿ, ಕುಂಟಿಗಾಗಿ, ಇದು ಸಿಲ್ಲಿ ಅನ್ನಿಸ್ತಿಲ್ವಾ ನಿಂಗೆ "ಎಂದ ವರುಣ್ ಮಾತಿಗೆ ಸ್ಥವಿರ "ಇಲ್ಲ"ಎಂದು ಕಿರುಚಿದ್ದು ಆ ಮನೆಯ ಹಾಲ್ ನಲ್ಲಿ ಪ್ರತಿಧ್ವನಿಸಿತ್ತು.
" ಅವತ್ತು ಕುಡಿದ ಮತ್ತಿನಲ್ಲಿ ಆ ಆ್ಯಕ್ಸಿಡೆಂಟ್ ಮಾಡಿದ್ದು ನಾನೇ, ಕಾಲು ಕಳೆದುಕೊಂಡಿದ್ದು ಅವಳು"
ಈ ಮಾತನ್ನು ಕೇಳಿ ಉಗುಳು ನುಂಗಿಕೊಂಡ ವರುಣ್, ಹಾವು ಮೆಟ್ಟಿ ಬೆಚ್ಚಿಬಿದ್ದಂತಾಗಿದ್ದ.
"ಶ್ರೀಮಂತಿಕೆ, ಬುದ್ಧಿವಂತಿಕೆ, ಸೌಂದರ್ಯ ಎಲ್ಲ ಸೇರಿದಾಗ ಸ್ವಲ್ಪ ಹೆಚ್ಚಿನದೇ ಉಡಾಫೆ ಪೊಗರಿರುವುದು ತಪ್ಪಲ್ಲ ಎನಿಸಿತ್ತು , ಆದರೆ ಅದೆಲ್ಲ ಈಮಟ್ಟಕ್ಕೆ ಒಬ್ಬರ ಜೀವ ತೆಗೆಯುವ ಮಟ್ಟಕ್ಕೆ ನಿನ್ನ ತಳ್ಳಬಹುದು ಅಂತಾ ಗೊತ್ತಿರಲಿಲ್ಲ" ಕಣೋ ..
"ನನಗೂ ಗೊತ್ತಿರಲಿಲ್ಲ " ಎಂದು ವರುಣ್ ನ ತಬ್ಬಿಕೊಂಡ ಸ್ಥವಿರನ ಕಣ್ಣಲ್ಲಿ ನೀರಿತ್ತು. "ಸರಿ ಮಾಡಿಕೊಳ್ಳುವುದಕ್ಕೆ ಒಂದೇ ಒಂದು ಅವಕಾಶಕ್ಕೆ ಕಾಯುತ್ತಿದ್ದೀನಿ , ಅವಳನ್ನ ನೋಡುವಾಗೆಲ್ಲಾ ಚೂರಿ ಇರಿದಂತಾಗುತ್ತೆ. ಒಪ್ಪದ ಅವಳು ಮಾತ್ರ ತಣ್ಣನೆ ಕಣ್ಣುಗಳ ಕೊಲೆಗಾರ್ತಿ"....
***********
ಟೆರೆಸ್ ಗಾರ್ಡೆನ್ ನಲ್ಲಿ ಕಾಫಿ ಕುಡಿಯುತ್ತಾ ಕುಳಿತಿದ್ದಳು ಹರಿಣಿ.
"ನಾನು ವರುಣ್ , ಸ್ಥವಿರನ ಬೆಸ್ಟ್ ಪ್ರೆಂಡ್ " ಪರಿಚಯ ಮಾಡಿಕೊಂಡ ವರುಣ್ .
ನಾನು ಹರಿಣಿ .. ಸ್ಥವಿರ ಹೇಳಿರಬೇಕಲ್ಲ ಎಂದು ನಕ್ಕಳು..
ಥ್ಯಾಂಕ್ಸ್ ನಿಮಗೆ , ಅವನಲ್ಲಿನ ಬದಲಾವಣೆಗೆ... ಇವತ್ತು ನೋಡಿ ನನ್ನ ಇಲ್ಲಿ ಬಿಟ್ಟು ಮೀಟಿಂಗ್ ಅಂತಾ ಹೋಗಿಬಿಟ್ಟ, ಒಂದಷ್ಟು ಜವಾಬ್ದಾರಿ , ಸಹನೆ , ಇನ್ನೊಬ್ಬರಿಗೆ ಸಹಾಯ ಮಾಡುವ ಒಳ್ಳೆತನ ಎಲ್ಲಾ ಬಂದಿದೆ.
ನಕ್ಕಳು ಅವಳು..
ಅವನ ಒಳ್ಳೆತನವನ್ನೂ ನೀವು ಒಪ್ಪಿಕೊಂಡಿದ್ದರೆ.... ಮಾತು ಮುಂದುವರೆಸ ಬೇಕಾ ಬೇಡವಾ ಎಂಬಂತೆ
ಹರಿಣಿಯ ಮುಖ ನೋಡಿವನಿಗೆ ಅವಳ ಮುಖದಿಂದ ನಗು ಮಾಯವಾಗಿದ್ದು ಸ್ಪಷ್ಟವಾಗಿತ್ತು.
ಸಹಾಯಕ್ಕೆ ಬದಲಾಗಿ ಪ್ರೀತಿಯನ್ನು ಒಪ್ಪಿಕೋ ಅಂತಾ ಹೇಳ್ತಿದೀರಾ ಅಲ್ಲವಾ..
ಹಾಗಲ್ಲ ಅವನು ನಿಮಗೋಸ್ಕರ, ನಿಮ್ಮಿಂದ ಬದಲಾಗಿದ್ದಾನೆ ....
ಅವರ "ಈ ಬದಲಾವಣೆಗಾಗಿ ನಾನು ತೆತ್ತ ಬೆಲೆ ನನ್ನ ಕಾಲು ವರುಣ್", ಸಹಾಯಕ್ಕೆ ಕೃತಜ್ಞತೆಯಿದೆ, ಆದರೆ ಕೆಲ ಗಾಯಗಳೂ ಯಾವತ್ತೂ ವಾಸಿಯಾಗಲ್ಲ ಮನಸಿನ ಮೇಲಾದವುಗಳು. "ಅವತ್ತಿನ ಆ ರಾತ್ರಿಯಲ್ಲಿ , ಜಜ್ಜಿ ಅಪ್ಪಚ್ಚಿಯಾದ ಕಾಲು, ದೂರ ಕಾರು ನಿಲ್ಲಿಸಿ , ಇಳಿದು ಒಮ್ಮೆ ನೋಡಿದ ಅವನ ಮುಖ, ಅವನೆಸೆದು ಹೋದ ದುಡ್ಡಿನ ಕಂತೆ ... ಇದೆಲ್ಲ ಇವತ್ತಿಗೂ ನನಗೆ ನಿತ್ಯವೂ ಬೀಳುವ ಕನಸಿನ ಭಾಗಗಳು"...
"ಎಲ್ಲ ತಪ್ಪುಗಳಿಗೂ ಶಿಕ್ಷೆಯಾಗಬಾರದು ಎಂದಾದರೆ , ಎಲ್ಲ ತಪ್ಪುಗಳಿಗೂ ಕ್ಷಮೆಯೂ ಇರುವುದಿಲ್ಲ" ಅಲ್ಲವಾ .
ಜೀವನ ಪರ್ಯಂತ ಶಿಕ್ಷಿಸಹೋರಟಿದ್ದೀರಾ? ಅವನೆದುರೇ ಇದ್ದು ಕಾಡುವ ಬದಲು ದೂರ ಮರೆಯಾಗಿಬಿಡಬಹುದಲ್ಲ.
ಮದುವೆಯಾದರೆ ಎಲ್ಲಾ ಪೂರ್ಣವಾಗಲ್ಲ , ಮತ್ತಷ್ಟು ಛೇದವೇ, ನಾನು ದಕ್ಕಿದ ಖುಷಿಗೆ ಮತ್ತೆ ಕುಡಿತ, ಮತ್ತೆ ಡ್ರೈವಿಂಗ್ , ನಾನೇ ಅವನ ಗುರಿಯಾಗಿರುವಾಗ ನನ್ನ ತಲುಪಿದ ಖುಷಿಗೆ ಮತ್ತೆ ಉಢಾಫೆ ಎಲ್ಲವೂ ಮರುಕಳಿಸುತ್ತವೆ. ನಾನವನನ್ನು ಅರ್ಥಮಾಡಿಕೊಂಡಿದ್ದೇನೆ.. ಈಗ ನೀವೆಂದ ಬದಲಾವಣೆಗಳೆಲ್ಲ ಮತ್ತೆ ಮೊದಲ ಬಿಂದುವಿಗೆ ಮುಟ್ಟುತ್ತೆ ವರುಣ್ . ನನ್ನಿರುವು, ನನ್ನೆಡೆಗಿನ ಪ್ರೀತಿ ಅವನನ್ನು ಸದಾ ಜಾಗೃತವಾಗಿಡುತ್ತದೆಯೆಂದಾದರೆ ಹಾಗೆ ಇರಲಿ...
ಇದು ಶಿಕ್ಷೆಯಲ್ಲ .. ನಿಮ್ಮ ಗೆಳೆಯನ ರಕ್ಷಣೆಗೆ ನಿಂತಿದ್ದೇನೆಂದುಕೊಳ್ಳಿ..
ಮೊದಲು ಪೋಣಿಸಿದ್ದು ಕೆಲವು ಸುಳ್ಳುಗಳು, ಅವನೆಡೆಗಿನ ಪ್ರೀತಿಯೇ ಇದನ್ನೆಲ್ಲ ಮಾಡಿಸುತ್ತಿರುವುದು. ಎಂದು ಮನಸಿನಲ್ಲೆ ಅಂದುಕೊಳ್ಳುತ್ತಿದ್ದರೂ ಕೊನೆಯ ವಾಕ್ಯ ಹರಿಣಿಯ ಬಾಯಿಂದ ಅಪ್ರಯತ್ನವಾಗಿ ಹೊರಬಂದು ಬಿಟ್ಟಿತ್ತು.
ಅವನಿಗೆ ಕೇಳಿಸಿತಾ ಎಂದು ತಟ್ಟನೆ ತಿರುಗಿದಳು ..
ಕೊನೆಯ ಮಾತು ತನಗೇ ಕೇಳಿಸಲೇ ಇಲ್ಲವಂಬಂತೆ ಅವಳಿಗೆ ಬೆನ್ನು ಹಾಕಿ ಹೊರಟಿದ್ದ ವರುಣ್. ಅವನಿಗೆ ಅವಳ ಪ್ರೀತಿ ಅರ್ಥವಾಗಿತ್ತು, ಮತ್ತೂ ತಾನು ಅದನ್ನೆಂದೂ ಸ್ಥವಿರನಿಗೆ ಹೇಳಲಾರೆ ಎಂದು ನಿರ್ಧರಿಸುತ್ತಲೇ ಮೆಟ್ಟಿಲಿಳಿಯತೊಡಗಿದ..
ಇತ್ತ ಮನದಲ್ಲಿ ಮೂಡುತ್ತಿದ್ದ ಸ್ಥವಿರನ ಚಿತ್ರವನ್ನು ಅಳಿಸುವಂತೆ ತಲೆಕೊಡವುತ್ತಾ ವಾಕಿಂಗ್ ಸ್ಟಿಕ್ ಹಿಡಿದು ಎದ್ದು ನಿಂತಳು ಹರಿಣಿ.
ಮಾತಿಲ್ಲ.. ಹರಿಣಿ ಮಾಡಿದ್ದು ತಪ್ಪೋ ಸರಿಯೋ ಅದರ ಬಗ್ಗೆ ಚರ್ಚೆ ಬೇಡ.. ಆದರೆ ಸ್ಥವಿರನನ್ನು ಯಾಕೆ ಬೇಡ ಎನ್ನುತ್ತಿದ್ದೇನೆ ಎನ್ನುವುದಕ್ಕೆ ಕೊಟ್ಟ ವಿವರ ಸುಂದರವಾಗಿದೆ.. ಪ್ರಾಯಶ್ಚಿತ್ತವಾದ ಮೇಲೆ ಮತ್ತೆ ಹಳೆ ಚಾಳಿಗೆ ಬಂದರೆ.. ಹರಿಣಿಗೆ ಸಹಾಯ ಮಾಡಿದ್ದು ಬರಿ ಬೂಟಾಟಿಕೆ.. ಅಥವಾ ಅಪರಾಧಿ ಮನೋಭಾವದಿಂದ ಅನ್ನಿಸುತ್ತದೆ.. ಮತ್ತೆ ಇನ್ನೊಂದು ದುರಂತ.. ಮತ್ತೊಂದು ಸಹಾಯ.. ತಿದ್ದಿಕೊಳ್ಳಲು ಜನ್ಮ ಸಾಲದೇನೋ!!!
ReplyDeleteಬ್ಲಾಗ್ ಪ್ರಪಂಚಕ್ಕೆ ಮರಳಿ ಸ್ವಾಗತ.. ಸೊಗಸಾಗಿದೆ.. ನನ್ನ ಕಾದಿದ್ದು ಎರಡು ಸಾಲುಗಳು
ಅವತ್ತಿನ ಆ ರಾತ್ರಿಯಲ್ಲಿ , ಜಜ್ಜಿ ಅಪ್ಪಚ್ಚಿಯಾದ ಕಾಲು, ದೂರ ಕಾರು ನಿಲ್ಲಿಸಿ , ಇಳಿದು ಒಮ್ಮೆ ನೋಡಿದ ಅವನ ಮುಖ, ಅವನೆಸೆದು ಹೋದ ದುಡ್ಡಿನ ಕಂತೆ ... ಇದೆಲ್ಲ ಇವತ್ತಿಗೂ ನನಗೆ ನಿತ್ಯವೂ ಬೀಳುವ ಕನಸಿನ ಭಾಗಗಳು...
ಸರಿ ಮಾಡಿಕೊಳ್ಳುವುದಕ್ಕೆ ಒಂದೇ ಒಂದು ಅವಕಾಶಕ್ಕೆ ಕಾಯುತ್ತಿದ್ದೀನಿ , ಅವಳನ್ನ ನೋಡುವಾಗೆಲ್ಲಾ ಚೂರಿ ಇರಿದಂತಾಗುತ್ತೆ. ಒಪ್ಪದ ಅವಳು ಮಾತ್ರ ತಣ್ಣನೆ ಕಣ್ಣುಗಳ ಕೊಲೆಗಾರ್ತಿ....
ವಾಹ್ ಸ್ಥವಿರ ಮೊದಲ ಬಾರಿಗೆ ಈ ಹೆಸರು ಕೇಳುತ್ತಿದ್ದೇನೆ.. ಸೂಪರ್ ಎಸ್ ಪಿ ಬೊಂಬಾಟ್ ಬರಹ..
Thank you Anna..
Deleteಮನವನ್ನು ಕೊರೆಯುವ ಕಥೆ. ಅಭಿನಂದನೆಗಳು.
ReplyDeleteಥ್ಯಾಂಕ್ಯೂ....
Delete